Pages

... W E L C O M E   T O   P R A S A D ' s   W E B P A G E ...

Friday, April 17, 2009

ಶಿವಧನಸ್ಸು ಮುರಿದಾಗ..


ಸೈಬ್ರಕಟ್ಟಿಯಿಂದ ಸಿದ್ದಾಪುರ ಹೋಪತಿಗೆ ಶಿರಿಯಾರ ಅಂದಳಿ ಒಂದ್ ಊರ್ ಸಿಕ್ಕತ್, ನೀವೆಲ್ಲ ಕೆಂಡಿಪ್ಪುಕು ಸಾಕ್. ಅಲ್ಲಿಗೆ ಶಿರಿಯಾರ ಅಂದಳಿ ಹೆಸ್ರ್ ಹೆಂಗ್ ಬಂತ್ ಅಂದಳಿ ಯಾರೊ ಒಬ್ರ್ ಮಾತಾಡ್ತ ಇದ್ದಿರ್, ಅವರ್ ಯಾರ್ ಅಂದಳಿ ಇಲ್ಲ್ ಬೇಡ ಈಗ. ಅದ್ರೆ ಅವ್ರ್ ಹೇಳು ಮಾತಿನ್ ಸ್ವಾರಸ್ಯ ಒಳ್ಳೆ ಇತ್. "ಶಿರಿಯಾರ ಅಂದ್ರೆ ಸಾಮನ್ಯ ಅಲ್ಲ, ಒಂದ್ ಕಾಲದಂಗೆ ಇಲ್ಲ್ ಚಿನ್ನ ಬೆಳ್ಳಿ ಎಲ್ಲಾ ಬೇಕಾದಷ್ಟು ಇದ್ದ್, ಜನರೆಲ್ಲ ಮಸ್ತ್ ದುಡ್ಡಿನರ್ ಆಯಿ ಇದ್ದಿರ್, ಹಾಂಗಾಯಿ, ಸಿರಿ ಆರದ ಊರು ಅಂದಳಿ ಹೆಸ್ರ್ ಅಯಿತ್, ಅದೆ ಕಡಿಕೆ ಆಡು ಮಾತಲ್ಲಿ ಶಿರಿಯಾರ ಆದ್ದ್ ಅಂತಿದ್ದಿರ್. ಅದ್ ಎಷ್ಟ್ ಸಿರಿ ಇದ್ದಿತೊ? ಅದನ್ನ ಯಾರ್ ಹೊತ್ಕ ಹೋರೊ ಆ ದೇವ್ರೇ ಹೇಳ್ಕ್. ಅದಕ್ಕೆ ಅವ್ರಿಗೆ ಅಯ್ದಿದ್ದರ್ ಒಬ್ರ್ ಅವರ್ ಮಾತಿಗೆ ಅಡ್ಡಕೋಲ್ ಹಾಕಿ, ಸಿರಿ ಯಾರದ್ದ್? ಅಂಬುಕ್ ಶುರು ಮಾಡ್ರ್. ಅವರ್ ಮಾತಿನ್ ಒಳಾರ್ಥ ಇಷ್ಟೆ. ಸಿರಿ ಇವರದ್ದ್ ಅಲ್ಲ, ಬೇರೆ ಎಲ್ಲಿಂದೊ ಕದ್ದ್ ತಂದದ್ದ್ ಅಂದಳಿ. ಶಿರಿಯಾರದ್ ಬದಿಯರ್ ಇದ್ರೆ ಕ್ಷಮೆ ಇರಲಿ :)

ಶಿರಿಯಾರ ಶಾಲಿ ಗೊತ್ತಿತ್ತಲೆ, ಆಗಳಿಗೆ ಅಲ್ಲ್ ಕಲ್ತರೊಬ್ಬರ್ ಹೇಳು ಮಾತ್. ಅವರ್ ಹೇಳುದ್, ನಮ್ಮನ್ನೆಲ್ಲ ಕಾರಿ ಬಾರ್ದಿದ್ದರ್ ಮಾಡದ್ದೆ ನಮ್ಮ ಹೆಡ್ ಮಾಷ್ಟ್ರ್ ಅಂದಳಿ. ಆಗಳಿಗೆ ಮಕ್ಕಳ್ನೆಲ್ಲ ಹೆಡ್ ಮಾಷ್ಟ್ರ್ ಅವರ್ ಮನಿ ಅಡಿಕೆ ತೋಟಕ್ಕೆ ಮಂಗ ಎಬ್ಬುಕೆ ಕಳ್ಸುದಂಬ್ರ್. ಯಾರ್ ಜಾಸ್ತಿ ಮಂಗ ಬೆರ್ಸ್ತ್ರೊ ಅವ್ರಿಗೆ ಜಾಸ್ತಿ ಮಾರ್ಕ್. ಹೇಂಗೆ? ಹೀಂಗ್ ಕಲ್ತ್ ಮಕ್ಕಳ್ ಉದ್ದಾರ ಆಪುದ್ ಹೌದಾ?

ಹೀಂಗಿಪ್ಪೊತ್ಲಿ, ಒಂದ ಸಲ ಶಾಲಿಗೆ ಇನ್ಸ್ಪೆಕ್ಟ್ರ್ ಬಂದ್ರ್ ಅಂಬ್ರ್. ಆರನೇ ಕ್ಲಾಸಿಗೆ ಆಗಳಿಗೆ ಯಾರೊ ಶೆಟ್ರ್ ಮಾಷ್ಟ್ರ್ ಅಂಬ್ರಪ. ಇನ್ಸ್ಪೆಕ್ಟ್ರ್ ಒಂದ್ ಗಂಡಿನ್ ನಿಲ್ಸಿ ಕೆಂಡ್ರ್ ಅಂಬ್ರ್, "ಶಿವ ಧನಸ್ಸು ಮುರದ್ದ್ ಯಾರ್?" ಅಂದಳಿ. ಅದಕ್ಕೆ ಅವ "ಕೃಷ್ಣ" ಅಂದ ಅಂಬ್ರ್. ಕೃಷ್ಣ ಅಂಬನ್ ಎದ್ದ್ ನಿತ್, "ನಾನಲ್ಲ" ಅಂದ ಅಂಬ್ರ್. ಇನ್ಸ್ಪೆಕ್ಟ್ರಿಗೆ ಸಿಟ್ಟ್ ಬಂದ್ ಮಾಷ್ಟ್ರಿಗೆ "ಎಂತ ಮಾಷ್ಟ್ರೆ ಇದ್?" ಅಂದಳಿ ಕೆಂಡ್ರೆ ಮಾಷ್ಟ್ರ್ "ಅವ ಮುರುಕಾಪನಲ್ಲಪ.. ಇವನ್ನಾರು ಹೇಳುಕಿಲ್ಲೆ.." ಅಂದ್ರಂಬ್ರ್.

ಇದನ್ನೆಲ್ಲ ಕೆಂಡ್ ಸಿಕ್ಕಾಪಟ್ಟೆ ಸಿಟ್ ಬಂದ್ ಇನ್ಸ್ಪೆಕ್ಟ್ರ್ ಸೀದಾ ಹೆಡ್ ಮಾಷ್ಟ್ರ್ ಹತ್ರ ಹೋರ್ ಅಂಬ್ರ್. ಆಗಳಿಕ್ ನಾರಯಣ್ ಮಾಷ್ಟ್ರ್ ಹೆಡ್ ಮಾಷ್ಟ್ರ್ ಅಂಬ್ರ್. ಇನ್ಸ್ಪೆಕ್ಟ್ರ್, "ಎಂತ ಮಾಷ್ಟ್ರೆ, ನೀವೇ ಹೇಳಿ, ಆ ಹುಡ್ಗನ್ ಹತ್ರ ಶಿವ ಧನಸ್ಸು ಮುರದ್ ಯಾರ್ ಕೇಂಡ್ರೆ, ಕೃಷ್ಣ ಅಂತ, ಮತ್ತೊಬ್ಬ ನಾನಲ್ಲ ಅಂತ, ಕ್ಲಾಸ್ ಟೀಚರ್, ಅವನ್ ಮುರುಕಾಪನಲ್ಲ ಅಂತ್ರ್. ಇದೆಂತ ಕಥಿ?" ಅಂದಳಿ ನಾರಾಯ್ಣ್ ಮಾಷ್ಟಿಗೆ ಕೇಂಡ್ರೆ, ನಾರಾಯ್ಣ್ ಮಾಷ್ಟ್ರ್ ಯಾವ್ದೊ ಮನಿ ಬದಿ ತಲಿಬಿಸಿಯಂಗ್ ಇದ್ದಿರ್ ಅಂಬ್ರ್. ಅವರ್ ಅದಕ್ಕೆ "ಅದ್ ಯಾರೆ ಮುರ್ದಿರ್ಲಿ.. ಅದ್ರ್ ದಂಡ ನಾನ್ ಕೊಡ್ತೆ.. !" ಅಂದ್ರ್ ಅಂಬ್ರ್.


ಈ ತರ ಶಿರಿಯಾರ ಬದಿಯ ಹಾಸ್ಯ ಘಟನೆಗಳು ತುಂಬಾ ಇವೆ, ಅವನ್ನೆಲ್ಲೆ ನಿಮ್ಮ ಮುಂದೆ ತರುವುದರ ಒಂದು ಚಿಕ್ಕ ಪ್ರಯತ್ನ ಇದು.

12 comments:

Unknown said...

ಒಟ್ಟಾರಿಮೇಲೇ ಕಥಿ ಸುಳ್ಳೋ ಸಥ್ಯವೋ ಗೊತ್ತಿಲ್ಲ, ಆದ್ರೇ ನೆಗ್ಯಾಡುಕ್ ನಂಗೊಂದ್ ವಿಷಯ ಸಿಕ್ಕದ್ದಂತು ಹೌದ್. ಇನ್ನು ಇಂಥಾದ್ ಇದ್ರೇ ಬರ್ಲಿ ಕಾಂಬ ...

Unknown said...

ಹ್ಮ್ಮ್ಮ್ ಪ್ರಸಾದ್ .., ಕಥೆ ಏನೋ ಲೈಕ್ ಇತ್..ಭಾರೀ ಗಮ್ಮತು ಇತ್.. ಆದ್ರೆ ನಾನು ಶಿರಿಯಾರದವನ್ ಅಂತ ಸ್ವಲ್ಪ ಕಸಿವಿಸಿ ಆತ ಇತ್ ಅಷ್ಟೇ ... ಆದ್ರು ಇರ್ಲಿ..ಭಾರಿ ಗಮ್ಮತ್ ಇತ್ ಕಥೆ. ಬರ್ಲಿ ಬರ್ಲಿ ಕಾಂಬ ಇನ್ನು ಶಿರಿಯಾರದ ಒಳ್ಳೊಳ್ಳೆ ಸ್ವಾರಸ್ಯಕರ ಘಟನೆಗಳು..Well done Prasad..

From: “`*~ಸನ್ ಶಿರಿ~*`” Sandeep Shetty Shiriyara

Sathisha said...

Very nice story, haven't heard this so far. Couldn't stop laughing for 10 minutes :)

ನಾನು ನಾನೇ.. said...

kundaapra kannada dage baruvar sankhye heenge jaasti aayli :-)

shruthi shetty said...

Ning pursott anheli sull sull kati kattuda?:))))

Prasad Shetty said...

@ ಪ್ರಸನ್ನ,
ಕಥಿ ಸುಳ್ಳಲ್ಲ.. ಎಲ್ಲಾರು ಹೆಳ್ತ್ರ್.. ಸತ್ಯವೆ ಇರ್ಕ್...
ಕಮೆಂಟಿಗೆ ಧನ್ಯವಾದಗಳು

@ ಸಂದೀಪ
ಕಸಿವಿಸಿ ಮಾಡ್ಕಣ್ಬೆಡಿ..
ಕಮೆಂಟಿಗೆ ಧನ್ಯವಾದಗಳು

Satish,
Thanks for the comments

@ Viajayaraj,
Thanks for reading and commenting..

@Shruti
thanks for comments..

Akshatha said...

seems like kundapur kannada :). went above my head

ನಾನು ನಾನೇ.. said...

yaake kundaapra kannadadalli bareele illa matte.. barini marayre

Unknown said...

Hmm Prasad., Innu kelav kathe barli kamba...
One more thing...Ee katheyal baruva Narayan mashtr yaar antha gothilla. Adre shiriyara shaleya retired headmadter Narayan shetty ninne ashte 'passed away due to prolonged illness'.
Avara athmakke shanthi sigali antha hareisuva.....

Sirin shetty Choradi said...

hwa a mastru innu idrana....:)

Prasad Shetty said...

As sandeep said, He passed away recently... Avara Atmakke shanti Sigali..

sandhya shetty said...

hai
nice story